Wednesday, May 27, 2015

ಮನದ ಸ್ವಗತ

"ಮರೆತ ಮನದೊಳಗೆ ಕಗ್ಗತ್ತಲು,
ನೊಂದ ಹೆಗಲಿನಲಿ ಭಯಭೂತ,
ಕುರುಡು ದೃಷ್ಟಿಯೊಳಗೆ ಪಾಪಿಜೀವಿ,
ಜಗದೊಡಲ ಬೇಗೆಗೆ ನನ್ನ ಹೋಲಿಕೆ.

ಬೆಂದಂತ ಜೀವಸತ್ವ ಹಳಸಿದೆ,
ಕರಿದಂಥ ಸಿಹಿಯೂಟ ಒಣಗಿದೆ,
ಹಸಿವಿದ್ದರೂ ಉದರಕ್ಕೀಗ ಅರಿಯದು,
ಕಾಣದಿರೋ ಲೋಕವೀಗ ಹತ್ತಿರ."

No comments:

Post a Comment