"ಹೆತ್ತ ಅಮ್ಮ-ಅಮ್ಮಗೆ ಹಸುಕಂದ ನೀನು
ಹೊತ್ತ ಭೂಮಿತಾಯಿಗೆ ಶೂರ ನೀನು,
ಜೊತೆಗಿರ್ಪ ಒಡನಾಡಿಗೆ ಬಂಧು ನೀನು,
ಎದುರಿನಾ ಶತ್ರುಗೆ ಮರಣಮೃದಂಗ ನೀನು.
ಎಲ್ಲಾ ಬಿಟ್ಟ ಸನ್ಯಾಸಿ ನೀನಲ್ಲ
ದೇಶದ ಗಡಿ ಬಿಟ್ರೆ ನಿಂಗಾರಿಲ್ಲ
ಊರ ಕೂಗು ಕೇಳಿ ಕೂಗಿದರೂ
ಎದೆಗೂಡೊಳಗೆ ದೇಶಕಿನ್ನ ಮಿಗಿಲೇನಿಲ್ಲ.
ರಕ್ತ ಚೆಂಡಾಡೋ ನಿನಗಿರಲಿ ಆನೆಬಲ
ಮನೆಮನದನ್ನೆಯ ನೆನಪಿಗಿರಲಿ ಸಹಿಗನಸು,
ನಿನ್ನಾ ಗೆಲುವಿಗೆ ನೀನೇ ರಾಜಕುಮಾರ,
ದೇಶದ ಗತ್ತಿಗೆ ನೀ ನಮ್ಮೂರ ಹಮ್ಮೀರ"
No comments:
Post a Comment