"ಕಾವೇರಿದ ಜನ ಮನಸಿಗೆ
ಕಾಳಾಕಿ ಸುಮ್ಮನಿರಿಸಲಾಗದು
ಮದವೇರಿದ ಮನಸುಗಳಿಗೆ
ಮಮತೆಯ ಕೂಗು ಕೇಳಿಸದು.
ಮಣ್ಣಿನ ಮಕ್ಕಳ ಬೇಗೆಯಲ್ಲಿ
ದೊಣ್ಣೆನಾಯಕರ ಹಟವಿದೆ
ಜನಮನಸಿನ ಎದೆಯುರಿಯಲ್ಲಿ
ಜನನಾಯಕರ ಬದುಕಿದೆ.
ಆ ಪಕ್ಷ ಈ ಪಕ್ಷ ಬೇಕಾಗಿಲ್ಲ
ಹೊಟ್ಟೆಗೆ ಅನ್ನ ಬೇಕಿದೆ, ದುಡ್ಡಲ್ಲ
ರೈತಂಗೆ ಹೊಡೆದೋರು ಉಳಿದಿಲ್ಲ
ಋಣ ತೀರಿಸಲು ಇದಕ್ಕಿನ್ನ ದಾರಿಯಿಲ್ಲ."
No comments:
Post a Comment