Thursday, July 28, 2016

"ಜನ ಮಾನಸ"

"ಕಾವೇರಿದ ಜನ ಮನಸಿಗೆ
ಕಾಳಾಕಿ ಸುಮ್ಮನಿರಿಸಲಾಗದು
ಮದವೇರಿದ ಮನಸುಗಳಿಗೆ
ಮಮತೆಯ ಕೂಗು ಕೇಳಿಸದು.

ಮಣ್ಣಿನ ಮಕ್ಕಳ ಬೇಗೆಯಲ್ಲಿ
ದೊಣ್ಣೆನಾಯಕರ ಹಟವಿದೆ
ಜನಮನಸಿನ ಎದೆಯುರಿಯಲ್ಲಿ
ಜನನಾಯಕರ ಬದುಕಿದೆ.

ಆ ಪಕ್ಷ ಈ ಪಕ್ಷ ಬೇಕಾಗಿಲ್ಲ
ಹೊಟ್ಟೆಗೆ ಅನ್ನ ಬೇಕಿದೆ, ದುಡ್ಡಲ್ಲ
ರೈತಂಗೆ ಹೊಡೆದೋರು ಉಳಿದಿಲ್ಲ
ಋಣ ತೀರಿಸಲು ಇದಕ್ಕಿನ್ನ ದಾರಿಯಿಲ್ಲ."

No comments:

Post a Comment