Friday, July 22, 2016

"ನಮ್ಮೊಳಗಿನ ನಮಗೊಂದು ಪತ್ರ"

ಆತ್ಮೀಯ ನಗರದ ಅತ್ಯುನ್ನತ ಸರ್ಕಾರಿ ಅಧಿಕಾರಿಗಳೇ(ಕಾರ್ಯಾಂಗ/ನ್ಯಾಯಾಂಗ/ಶಾಸಕಾಂಗ), ದೊಡ್ಡೋರನಿಸಿಕೊಂಡೋರ ಚಮಚ ಚೇಲಾಗಳೇ, ಆರಕ್ಷಕ ಅಧಿಕಾರಗಳೇ (ನಾಗರೀಕ/ಸಂಚಾರ), ಸಕಲ ಸೇವಾ ಸಿಬ್ಬಂಧಿಗಳೇ,  ಹಾಗೂ ನೆಲ್ಮೆಯ ಸತ್ತಂತಿರೋ ಸತ್ಪ್ರಜೆಗಳೇ,

೧. ಶುಕ್ರವಾರ ಬಂತೆಂದರೆ, ನಾಗರೀಕ ಸಮುದಾಯಕ್ಕೆ ನಗರದೊಳಗೆ ವಾಹನ ಚಾಲಾಯಿಸಲು(೧೨-೫) ಒಂಥರಾ ಸಂಕಟ ಶುರುವಾಗುತ್ತೆ. ೬೦%-೮೦% ಮುಸಲ್ಮಾನ ಸೋದರರು ಮೂರ್ಮೂರು ಜನ ಸವಾರಿ ಮಾಡ್ತಾ, ಶಿರಸ್ತ್ರಾಣ ಕೂಡ ಹಾಕೊಳ್ಳದೆ ವಿಪರೀತ ವೇಗವಾಗಿ ಓಡಾಡ್ತಾರೆ‌. ಪ್ರಶ್ನಿಸಲು ಹೋದರೆ ನಮಗೇ ತಿರುಗಿ ಪ್ರಶ್ನಿಸ್ತಾರೆ‌. ಇದು ಖಂಡಿತ ಒಳ್ಳೆಯ ಸಮಾಜ ಸೃಷ್ಟಿಗಲ್ಲ. ಜನಸಾಮಾನ್ಯರ ತಾಳ್ಮೆ ಪರೀಕ್ಷೆ ಜಾಸ್ತಿಯಾದರೆ, ಒಂದಲ್ಲ ಒಂದು ದಿನ, ನಮ್ಮ ಬೆಂಗಳೂರು ಇರಾಕ್/ಇರಾನ್/ಟರ್ಕಿ/ಪಾಕ್ ಆಗೋದ್ರಲ್ಲಿ ಸಂಶಯವಿಲ್ಲ‌.

೨. ಕಾಲೇಜು(ಕೆಲವೊಮ್ಮೆ ಪ್ರೌಢಶಾಲೆ) ವಿದ್ಯಾರ್ಥಿಗಳು ಕೂಡ ವಿಪರೀತ ಆಡ್ತಾರೆ. ಕೇಳಿದ್ರೆ, ನಮ್ ಸ್ಟೂಡೆಂಟ್ ಪವರ್, ಅದು ಇದು ಅಂತ ವರಾತ ಮಾಡ್ತಾರೆ‌. ಒಂದೋ ಇದಕ್ಕೆಲ್ಲಾ ಕಡಿವಾಣ ಸರಿಯಾದ ರೀತಿಯಲ್ಲಿ ಹಾಕಿ‌, ಅಥವಾ ನಾವೇನು ಮಾಡ್ಬೇಕೆಂದು ತಿಳಿಸಿ‌. ಇಲ್ಲಾಂದ್ರೆ ಜನಸಾಮಾನ್ಯ ಮೃಗವಾಗೋ ದಿನ ದೂರವಿಲ್ಲ.

೩. ನಮ್ ಬೆಂಗಳೂರ ಶಾಲಾವಾಹನಗಳ ಚಾಲಕರಿಗೆ ಅವರು ದೇವಲೋಕದ ಸಾರಥಿಗಳಲ್ಲ, ಅಥವಾ ದೇವಲೋಕದಲ್ಲಿ ವಾಹನ ಚಲಾಯಿಸ್ತಾಯಿಲ್ಲ ಅನ್ನೋದನ್ನ ಅರ್ಥ ಮಾಡಿಸಿ‌. ಇಲ್ಲಾಂದ್ರೆ ಮುಂದೆ, ನರಕಸದೃಶವಾಗಿ ಅನುಭವಿಸ್ತಾರೆ.

೪. ಇನ್ನು ದೊಡ್ಡ ತಲೆನೋವಂದ್ರೆ, ನಗರ ವಲಯದಲ್ಲಿ ನೀರು ಸರಬರಾಜು ಮಾಡೋ ಚಾಲಕರು(ಕೆಲವೊಮ್ಮೆ ಟ್ರಾಕ್ಟರ್ ಸಹ), ಖಾಸಗಿ ಪ್ರಯಾಣ ವಾಹನದ ಚಾಲಕರು, ರಸ್ತೆಗೆ ಅವರೇ ಒಡಯರೇನೋ ಎಂಬಂತೆ ಆಟ ಆಡ್ತಾರೆ. ಇದೆಲ್ಲಾ ನಮ್ ಬೆಂಗಳೂರಿನ ಅಂದ, ಒಳ್ಳೆತನದ ದುರುಪಯೋಗ ಮಾಡೋ ಛಾಳಿ ಎಂದರೆ ತಪ್ಪಲ್ಲ.

೫. ದೊಡ್ಡೋರು ಅನಿಸಿಕೊಂಡ ಜನನಾಯಕ/ಜನಪ್ರತಿನಿಧಿ/ಉದ್ಯಮಿ/ಐಟಿ-ಬಿಟಿ-ಸೋಡಾ ಚೀಟಿ ಐಕಾನ್ಸ್/ತಮ್ಮ ದೊಡ್ಡದೆನಿಸಿದ ಕಾರುಗಳನ್ನ ದಯಮಾಡಿ ನಗರವಲಯದಲ್ಲಿ ಕಡಿಮೆ ವೇಗದಲ್ಲಿ ಚಾಲಿಸಿ, ಅಕಸ್ಮಾತ್, ಯಾರಾದ್ರು ಹಿಂದಿನಿಂದ ದಾರಿಕೇಳಿದರೆ ದಾರಿಕೊಟ್ಟು ದೊಡ್ಡೋರಾಗಿ, ಮಳೆಗಾಲದಲ್ಲಿ ದ್ವಿಚಕ್ಕವಾಹನ ಸವಾರರಿಗೆ ದಾರಿಮಾಡಿಕೊಡಿ‌‌ ನಿಮ್ಮ ಗಂಟೇನು ಹೋಗಲ್ಲ. ನಗರದೊಳಗೆ ಪ್ರಜ್ವಲಿಸೊ ದೀಪ ಪ್ರದರ್ಶನ ಬೇಡ.

೬. ನಿಮ್ಮ ಹಿಂದೆ ತುರ್ತುವಾಹನ(ಆ್ಯಂಬುಲೆನ್ಸ್) ಇದ್ದರೆ, ಶಬ್ಧ ಮಾಡಿ ಮುಂದಿರೋ ವಾಹನ ಚಾಲಕನ ಗಮನಸೆಳೆದು ನೀವೂ ದಾರಿ ಮಾಡಿಕೊಡಿ‌. ಬದಲಾಗಿ, ವಾವ್ ಆ್ಯಂಬುಲೆನ್ಸ್ ಬಂತು, ಟ್ರಾಫಿಕ್ ಕ್ಲೀಯರ್ ಆಗುತ್ತೆ ಅನ್ನೋ ಮೃಗೀಯ ವರ್ತನೆ  ಮಾಡಬೇಡಿ.

೭. ಮಹಾನಗರದ ಮಹಾ ಮಾತೃಪಿತೃ ದೇವರುಗಳೇ,
ನಿಮ್ಮ ಮಕ್ಕಳಿಂದ ಅಕ್ಕಪಕ್ಕದ ಮನೆಮಕ್ಕಳು ಏನಾದರು ಸಮಾಜಮುಖಿ ಬೆಳವಣಿಗೆ ಕಲಿಯೋಹಾಗೆ ಬೆಳೆಸಿ, ಅವರು ಕೇಳಿದಕ್ಕೆಲ್ಲಾ ಹಣವಿದೆ, ಇರೋ ಒಬ್ಬ ಮಗ/ಳು ಅಂತ ಎಲ್ಲಾ ಮಾಡಿ, ಆಮೇಲೆ ಸರ್ಕಾರ/ಸವಲತ್ತಿನ ಬಗ್ಗೆ ಶಾಪ‌ ಹಾಕೋದನ್ನು ಬಿಡಿ‌.

ಕೊನೆಯದಾಗಿ,
ನಿಮ್ಮ ಊರಿದು. ನೀವೇ ಇಲ್ಲಿ ಸಾರ್ಬಭೌಮರು. ಇತರರಿಗೆ ಆದರ್ಶಪ್ರಾಯರಾಗಿ. ಶಾಪಗ್ರಸ್ತರಾಗದಿರಿ.
ಕರುನಾಡ ಮಡಿಲಲ್ಲಿ ಕನ್ನಡ ಕಲಿತು, ಕನ್ನಡ ಮಾತಾಡಿ, ಕನ್ನಡ ಕಲಿಸಿ, ನಾವು ಈ ಮಣ್ಣಿನ ಋಣ ತೀರಿಸುವತ್ತ ಬದುಕೋಣ, ಬೆಳೆಯೋಣ, ಇಂದಿನ ಇದೇ ಭೂತಾಯಿ ಒಡಲಲ್ಲಿ ಮಣ್ಣಾಗೋಣ.

ಜೈ ಭಾರತಾಂಬೆ,
ಜಯ ಜಯ ಕರುನಾಡು.

2 comments:

  1. tumba arthagharbithavada maatugaLu.. impliment aadre chennagirutte...aadre aagodu sulabhada maatalla....

    ReplyDelete
  2. ಪ್ರತಿಕ್ರಿಯೆಗೆ ವಂದನೆಗಳು,��
    ನಮ್ಮೊಳಗಿನ ನಾವುಗಳು ಬದಲಾದರೆ, ಖಂಡಿತ ಸಾಧ್ಯ. ����

    ReplyDelete