Monday, August 3, 2015

""ಐರಾವತ''"

"ನಾನೆಂಬ ಬಿಳಿ ಆನೆಯ
ಸಾಕೋ ಶುಭ್ರ ಮಾನಸಿ,
ನಾನೆದೆನು ಅತಿ ಭಾರ,
ಸಿಗದು ಬೇಕಾದ ದಿನಸಿ.

ಸಾಕಿದಾ ಒಡತಿಯ ಕ್ಷಮಿಸಲೊಲ್ಲೆ,
ಮದವೇರಿ ಮನಬಂದಂತೆ,
ಬದುಕಿದಾ ಬಿಳಿ ಸಲಗ ನಾ,
ಒಡತಿಯ ಮನಸು ಅರಿಯಲೊಲ್ಲೆ.

ಮಾಡಿದ ಕಾನನ ಬೇಟೆಯಲ್ಲಿ,
ಕಪ್ಪು ಚುಕ್ಕೆಗಳೇ ಎಲ್ಲಾ,
ಬಣ್ಣ ಹಚ್ಚಿದ ಬಿಳಿ ಗಜ
ಎಂದರಿವಾದರೆ ಅದೇ ಸಾರ್ಥಕ್ಯ."