Tuesday, September 25, 2018

ಅರಿಯುವನೇ ಮನುಜ!!?

'ನಾಗೇಶ್ವರನ ನಂಬುವರು
ಅವನ ಕೊರಳಲ್ಲಿರೋ ಹಾವನ್ನಲ್ಲ!!!
ಮೂಷಿಕವಾಹನನ ನಂಬುವರು.
ಅವನ ವಾಹನ ಮೂಷಿಕವನ್ನಲ್ಲ!!!.

ಶನೇಶ್ವರಗೆ ಹೆದರಿ ಕೈಮುಗಿವೆವು
ಅವನ ವಾಹನ ಕಾಗೆಯನ್ನಲ್ಲ!!!
ಶ್ರೀಹರಿಗೆ ಕರ ಮುಗಿವೆವು
ಅವನೇ ಅವತರಿಸಿದ ಹಂದಿಯನ್ನಲ್ಲ!!!

ಏನಿದ್ದರೂ ಕಡಿಮೆಯೇ!!
ಎನಿತಿದ್ದರೂ ರೋಧನೆಯೇ!!
ಈ ನರಮನ್ಸನ ಜೀವನದಲಿ
ಇವನಿಗೊಪ್ಪುವ ವಿಷಯ ಇಲ್ಲಿಲ್ಲ ಜೋಕೇ!!!'