'ನಾಗೇಶ್ವರನ ನಂಬುವರು
ಅವನ ಕೊರಳಲ್ಲಿರೋ ಹಾವನ್ನಲ್ಲ!!!
ಮೂಷಿಕವಾಹನನ ನಂಬುವರು.
ಅವನ ವಾಹನ ಮೂಷಿಕವನ್ನಲ್ಲ!!!.
ಶನೇಶ್ವರಗೆ ಹೆದರಿ ಕೈಮುಗಿವೆವು
ಅವನ ವಾಹನ ಕಾಗೆಯನ್ನಲ್ಲ!!!
ಶ್ರೀಹರಿಗೆ ಕರ ಮುಗಿವೆವು
ಅವನೇ ಅವತರಿಸಿದ ಹಂದಿಯನ್ನಲ್ಲ!!!
ಏನಿದ್ದರೂ ಕಡಿಮೆಯೇ!!
ಎನಿತಿದ್ದರೂ ರೋಧನೆಯೇ!!
ಈ ನರಮನ್ಸನ ಜೀವನದಲಿ
ಇವನಿಗೊಪ್ಪುವ ವಿಷಯ ಇಲ್ಲಿಲ್ಲ ಜೋಕೇ!!!'
No comments:
Post a Comment