Monday, April 16, 2018

'ವರುಣನಿಗೊಂದು ಮನವಿ'

ಹೇ ವರುಣನೇ,,
ರವಿಯ ಉರಿಯನ್ನು ಲೆಕ್ಕಿಸದೆ
ಅವನ ಕಿರಣದೊಳಗೆ ಒಂದು
ಮುತ್ತು ಧರಿಸಿರುವೆ.

ಮನುಜನ ಕಾಮ
ದಾಹವ ಮೀಟಿ
ಮನುಜಮತಕ್ಕೆ ತಂಪೀಯಲಾರೆಯ?
ಕಾಮದ ಬೆಂಕಿಯ ದಮನಿಸಲಾರೆಯ?

ಸರ್ವ ಜೀವಕೆ ನೀನು ಬೇಕು
ರವಿಯ ಕಿರಣವೂ ಬೇಕು.
ಅತಿಯಾದ ಬೇಗುದಿಗೆ
ಬೇಲಿ ಹಾಕಲಾರೆಯ?

ಉರಿವ ಮನದೊಳಗಣ ಬೆಂಕಿಗೆ
ನೀತಾನೆ ಏನು ಮಾಡುವೆ?
ಕಾಮಿಸಿ ಕೊಲ್ಲುವ ಮನುಜನ
ಮನವ ನೀ ಹೇಗೆ ದಮನಿಸುವೆ?

ಅಸಹಾಯಕ ಹೆಣ್ಮನಸ್ಸುಗಳ
ಕಂಬನಿ ನೀ ತೊಡೆಯುವೆಯಾ?
ಒಡೆದ ಮನಸುಗಳ ಒಗ್ಗಟ್ಟಿಗೆ
ನೀ ಸೇತುವೆ ಆಗುವೆಯಾ?

ಕಳಕೊಂಡ ಜೀವ ಬೇನೆಗೆ
ಹೆತ್ತೊಡಲ ಖಾಲಿ ಬಿಡುವೆಯಾ?
ಅಕ್ಕರಿಸಿದ ಮಗಳ ಗೆಲುವಿಗೆ
ಕಾದಿದ್ದ ತಂದೆಯೆದೆಗೆ ಬೆಂಕಿ ಇಡುವೆಯಾ?

ಹೇ ವರುಣನೆ,, ಉರಿವ ಮನಸಿಗೆ
ತಂಪು ನೀಡೆಯಾ??,,,,,

No comments:

Post a Comment