Thursday, November 12, 2015

ಈಗಿನ ವಿದ್ಯಾಮಾನಕ್ಕೊಂದು ಬರಹ

"ಮಕ್ಕಳೇ,,,, ನಮ್ಮದು ಜಾತ್ಯಾತೀತ ರಾಷ್ಟ್ರ, ನಾವೆಲ್ಲಾ ಭಾರತಾಂಬೆಯ ಮಕ್ಕಳು. ರಾಮ್-ರಹೀಮ್-ಯೇಸು ಎಲ್ಲರು ಒಂದೇ ಹೇಳಿದ್ದು. ಶಾಂತಿ! ಶಾಂತಿ!! ಶಾಂತಿ!!! ಎಂದು, ನಾವೆಲ್ಲರೂ ಭಾವೈಕ್ಯತೆಯಿಂದ ಬಾಳಬೇಕು. ಎಲ್ಲ ಸಮಾಜದವರನ್ನು ಸಹೋದರ-ಸಹೋದರಿಯರಂತೆ ಕಾಣಬೇಕು. ಎಂದಿಗೂ ಶಾಂತಿಯ ನೆಲೆಗಾಣಬೇಕು."

ಎಷ್ಟು ಚಂದ ಇತ್ತಲ್ವಾ?? ಆ ಬಾಲ್ಯದ ಶಾಲಾಜೀವನದ ಸರಕಾರಿ ಶಿಕ್ಷಕರ ರಸವತ್ತಾದ ಬುದ್ಧಿಮಾತು. ನಾವೆಲ್ಲರೂ ಅಮರ್-ಅಕ್ಬರ್-ಅಂಥೋಣಿ'ಯರೇ ಆಗಿಬಿಡ್ತಿದ್ವಿ!!!
ಈಗೆಲ್ಲಾ ಎಲ್ಲಿ ನೋಡಿದರೂ ಕೇಳಿದರೂ,,,
"ಮಾರ್-ಕಾರ್-ಧೋಣಿ"ಯೇ ಆಗ್ತಿದೆ.

ಹಿಂದು-ಮುಸ್ಲಿಂ-ಕ್ರೈಸ್ತ ಜೊತೆಗೆ ಇನ್ನೂ ಹಲವು ಧರ್ಮಗಳ ಸಂಗಮವೇ ನಮ್ಮೀ ಭಾರತ ಮಾತೆಯ ಒಡಲು-ಮಡಿಲು!!

'ಹಳೆಯದೆಲ್ಲವ ಮರೆತು ಹೊಸದರತ್ತ ನಡೆ,
ಹಳಸಿದ ಹಳೆಯ ದ್ವೇಷಾಗ್ನಿಯ ತಡೆ,
ಹರಡು ಭಾರತಾಂಬೆಯ ನಿಜ ಪ್ರೀತಿಯ ಕೊಡೆ.'

ಅಂವ ಹಿಂದು! ಕೆಟ್ಟ ಹುಳ!! ನಿಮಿಷಕ್ಕೊಂದು ವ್ಯಸನ!!!
ಅಂವ ಮುಸ್ಲಿಂ! ವಿಷ ಸರ್ಪ!! ಅತೀ ಬಣ್ಣದ ಗೋಸುಂಬೆ!!!
ಇಂವ ಕ್ರೈಸ್ತ! ಮೌನ ಮಂಡೂಕ!! ಕಚ್ಚಿದರೂ ಅತೀ ಪ್ರೀತಿ!!!

ಇಂಥವುಗಳೆಲ್ಲಾ ನಾವೇ ಸೃಷ್ಟಿಸಿದ ಸಾಮಾಜಿಕ ಬದುಕಿನ ಕರಿನೆರಳುಗಳು. ಎಲ್ಲವನ್ನು ಸೃಷ್ಟಿ ಮಾಡಿದ್ದು ನಾವೇ ಅಲ್ವಾ? ನಮ್ಮ ಅಜ್ಜಿ-ತಾತ ಮುತ್ತಜ್ಜಿ-ಮುತ್ತಾತರ ಮಾತುಗಳು (ನಮಗದು ಐತಿಹಾಸಿಕ) ಕ್ರೋಧ ತರಿಸುವಂಥದ್ದಾಗಿರಲಿಲ್ಲ. ಬುದ್ಧಿಜೀವಿ ಎನಿಸಿಕೊಂಡ ಹಲವು ವಿಷ ಜಂತುಗಳು(ಎಲ್ಲಾ ಧರ್ಮದಲ್ಲೂ ಇದ್ದಾರೆ!!!) ಮಸಾಲೆ ಅರೆದು ಯುವ ಸಮೂಹಗಳನ್ನು ಬಲಿಪಶು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಕ್ಕೆ ಶುರು ಮಾಡಿದ್ರು ನೋಡಿ!!! ಅಲ್ಲಿಂದ ನಮ್ ಭಾರತಾಂಬೆಯ ಮಡಿಲು ರಕ್ತಸಿಕ್ತವಾಗಿದ್ದು.

೨೫-೩೮ರ ಹರೆಯದ ಯೌವ್ವನ-ಗೃಹಸ್ಥಾಯನದಲ್ಲಿರೋ ಎಲ್ಲಾ ಭಾರತೀಯರು ಒಂದೇ ಒಂದು ಸಾರಿ ನಿಮ್ಮ ನಿಮ್ಮ ಪ್ರಾಥಮಿಕ ವಿದ್ಯಾಭ್ಯಾಸಗಳ ದಿನಗಳು, ನಿಮ್ಮೂರಿನ ಸಾಮಾಜಿಕ ಹಾಗೂ ದೇಶವಾಚರಿಸೋ ಹಬ್ಬ ಹರಿದಿನಗಳನ್ನು ನೆನಪಿಸಿಕೊಳ್ಳಿ. ಏನಾದರೂ ವ್ಯತ್ಯಾಸ ಈಗಿನ ಸಮಾರಂಭಗಳಿಗೆ ಕಂಡರೆ ಅದಕ್ಕಿಂತ ಉದಾಹರಣೆ ಬೇಕಿಲ್ಲ ನಾವುಗಳು ಇದ್ದೂ ಸತ್ತಂತೆ ಎಂಬುದು. ಎಲ್ಲವೂ ನಮ್ಮಿಂದಲೇ ಹಾಳಾಗಿದ್ದಂತೂ ಸತ್ಯ.

ಒಬ್ಬನೇ ಭಗತ್ ಸಿಂಗ್ ಹುಟ್ಟಿದ್ದು!
ಒಬ್ಬನೇ ಸುಭಾಷ್ ಚಂದ್ರ ಹುಟ್ಟಿದ್ದು!
ಒಬ್ಬನೇ ಬಿಸ್ಮಿಲ್ಲಾಖಾನ್ ಹುಟ್ಟಿದ್ದು!
ಒಬ್ಬನೇ ಅಬ್ದುಲ್ ಕಲಾಂಹುಟ್ಟಿದ್ದು!

೧೨೬++++ ಕೋಟಿ ಜೀವಂತ ಶವಗಳೇ ಇರೋದು ನಮ್ಮೊಳಗೆ!!! (ನನ್ನನ್ನೂ ಸೇರಿಸಿ)

"ಅಂವ ಹಂದಿ ತಿಂತಾನೆ!
ಇಂವ ದನ ತಿಂತಾನೆ!!"

ಅದ್ಕೆ ನಂಗಾಗಲ್ಲ ಈ ನನ್ಮಕ್ಳನ್ನ ಅಂತ ಬೇರೆ ದೇಶದವರು ನಮ್ಮವರನ್ನ ಹೊಡೆದೋಡಿಸ್ರೋ ನಮ್ ದೇಶದಿಂದ ಅಂತ ಏನಾದ್ರು ಯೋಚಿಸಿದ್ರೇ!!!!!??? ಪರದೇಶದಲ್ಲಿರೋ ನಮ್ಮವರ ಗತಿ!!!???

ಅಲ್ಲರೀ,,,, ತಿನ್ನೋ ಆಹಾರ ಅನಾದಿಕಾಲದಿಂದಲೂ ಆಯಾ ಜಾನಾಂಗ, ಆಯಾ ಸಮಾಜ, ಅವರವರ ಭಾವ ಭಕುತಿಗೆ ಅದರ ಪಾಡಿಗೆ ಅದು ನಡಿತಾಯಿದೆ. ೨೨ನೇ ಶತಮಾನ ಅಲ್ಲ ೨೫ ಶತಮಾನದಲ್ಲೂ ಆಹಾರ ಪದ್ಧತಿ ಅವರವರ ಭಾವಭಕ್ತಿಗೆ ಬಿಟ್ಟಿದ್ದು. ಅದಕ್ಕೂ ಕಲ್ಲು ಬೀಳಿಸಿಕೊಂಡು ಊಟದ ತಟ್ಟೆಗೆ ಮಣ್ಣು ಬೀಳಿಸಿಕೊಳ್ತಿರೋರು ನಾವೇ!!!!

"ಜೈಕಾರ ಹಾಕಿದಂವ ಮಣ್ಣಾದ,
ಹಾಕಿಸ್ಕೊಂಡಂವ ಮಹರಾಜನಾದ!,
ಅನಾಮಧೇಯ ಜನಸಾಮಾನ್ಯ,
ದೇಶದೊಳ್ ಅನಾಥನಾಗೋದ."

ಯಾರೋ ಕರೀತಾರೆ, ಇನ್ಯಾರೋ ಅರಚ್ತಾರೆ, ಅದು ಸರಿ ಇದು ತಪ್ಪು ಅನ್ತಾರೆ. ಬಾ ಹೋಗೋಣ ಹೊಡೆದಾಡಲು ಅಂತಾರೆ. ಕರ್ದೋನು ಜಾಣರ ಜಾಣ ಎಲ್ಲೋ ಮರೆಯಾಗ್ತಾನೆ. ಏನನ್ನೂ ಯೋಚ್ಸದ ಜನಸಾಮಾನ್ಯ ಮಣ್ಣಾಗ್ತಾನೆ. ಇದೆಲ್ಲಾ ನಮಗೆ ನಿಜವಾಗಿಯೂ ಬೇಕಾ?
ಮಣ್ಣಾದವರ ಮನಗೆ ಯಾವನಾದ್ರೂ ಹೋಗಿ ನಿಮ್ಮ ಸಂಸಾರದ ನೊಗ ನಾ ಹಿಡಿತೀನಿ ಅಂತಾನ? ಹಿಡಿದರೂ ೫ವರ್ಷಕ್ಕಿಂತ ಜಾಸ್ತಿ ವರ್ಷ ನೋಡ್ಕೋತಾನ?  ನೋಡ್ಕೊಂಡ್ರೂ ಕಳಕೊಂಡೋರಿಗದು ನೆಮ್ಮದಿಯೇ!!!????

"ಇರುವುದೆಲ್ಲವ ಬಿಟ್ಟು
ಇರದುದೆಡೆಗೆ ತುಡಿವುದೇ
ಜೀವನ. - ಡಿ.ವಿ.ಜಿ."

ಹಾಗಂತ ದೇಶವನ್ನೇ ಅಲ್ಲಾಡಿಸಿ ಅದೇನು ಸಾಧನೆ ಮಾಡಲು ಹೊರಟಿದ್ದೀರೋ ನಾಯಕರೇ!!!!?? ಜೊತೆಗೋಗಿ ಮಣ್ಣಾಗ್ತಿರೋ ನವಯುವಸಮೂಹವೇ!!!???

""ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ತಾಯಿಯೇ""

ಜಯ ಕರುನಾಡು,
ಜಯ ಜಯ ಭಾರತ........